ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ –
ಮೇಜುವಾನಿಯ ಸಿಹಿ ಕಹಿಯಾಗಿ
ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು
ಯಾರಿಗೂ ಗೊತ್ತಿರಲಿಲ್ಲ.

ಮುಗುಳು ನಗುತ ನಿಸರ್ಗದಲಿ
ಅದ್ದಿ ಬಿಡುವ ನೇಪಾಳ
ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ
ದೊರೆ ಬೀರೇಂದ್ರ ರಾಣಿ ಐಶ್ವರ್ಯ
ಯುವರಾಜ ದೀಪೇಂದ್ರ
ಎಂತೆಂತಹ ರತ್ನಗಳು
ಕಾಠ್ಮಂಡು ಒಡ್ಡೋಲಗಕೆ

ರಾಜಗಾಂಭೀರ್ಯದ ಹುಡುಗಿ ತರುವ ಆಸೆ
ರಾಜಮಾತೆಗೆ,
ಪ್ರೀತಿಸಿದ ಹುಡುಗಿ ಬೇಕೇ ಬೇಕು
ಮೀಸೆ ಮೂಡಿದೆ ಮದೋನ್ಮತ್ತ
ಯುವರಾಜನಿಗೆ.
ಮಾತಿಗೆ ಮಾತು ವರಸೆ ಬೆಂಕಿ.

ವಿಧಿಯೋ ವಿಚಿತ್ರ,
ಪ್ರೇಮದೈಸಿರಿಗೆ ಕಳಚಿಕೊಳ್ಳದ ಸಂಕೋಲೆ,
ಮಾತು ಚರ್ಚೆಗಳಿಗೆಲ್ಲ ಆವೇಶ
ಗುಂಡಿಗೆಯ ರಕ್ತದ ದುಡುಕುತನಕೆ
ಕಿಚ್ಚುಹೊತ್ತಿ ಸುಡುವ ಕೆನ್ನಾಲಿಗೆ.

ಕಾಲನ ಅವೇಶದ ಮುಂದೆ
ಮತಿಹೀನ ಯುವಕ
ರಾಜಗಾಂಭೀರ್ಯ ಧಿಕ್ಕರಿಸಿದ್ದು
ಯಮನ ಅಟ್ಟಹಾಸಕೆ ಕುಮ್ಮಕ್ಕು
ಕಗ್ಗತ್ತಲೆಯ ಕೆಸರಲಿ ಸಿಕ್ಕ ಕಾಲಕ್ಕೆ
ಚಲಿಸದ ಜಡತ್ವ.

ದವಡೆಮೀರಿದ ಕೋಪಾಗ್ನಿಯಲಿ
ಯುವರಾಜ ಕೈಗೆತ್ತಿದ ಬಂದೂಕು
ನುಗ್ಗಿ ನುಗ್ಗಿ ಬಂದ ಗುಂಡಿನಮಳೆಗೆ
ಒಂದೊಂದೇ ಕಳಚಿದವು
ಕಿರೀಟ ರತ್ನಗಳು,
ನೆತ್ತರ ಮಡುವಿನಲಿ ಮುಳುಗಿ
ಕಗ್ಗತ್ತಲ ಕಣಿವೆಯಲಿ ಹೆಣವಾದವು

ನೇಪಾಳದ ಅಂಗಳದ ತುಂಬೆಲ್ಲ
ರಕ್ತದೋಕುಳಿ ಕಿರುಚಾಟ ಹಾಲಾಹಲ
ಅರಮನೆಯ ದೀಪಗಳೆಲ್ಲ ಒಡೆದು ನುಚ್ಚುನೂರು
ಸುತ್ತೆಲ್ಲ ಕಪ್ಪು ಕತ್ತಲೆ!

(ದೇವಯಾನಿ ರಾಣಾಳ ಪ್ರೇಮಪಾಶಕ್ಕೆ ಸಿಲುಕಿದ ನೇಪಾಳದ ಯುವರಾಜ ಅವಿವೇಕಿಯಾಗಿ ಗುಂಡು ಹಾರಿಸಿ ಎಲ್ಲರನ್ನೂ ಕೊಂದು ತಾನೂ ಸತ್ತುಹೋದ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೯೭
Next post ನರಭಕ್ಷಕಿ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys